
ವರದಿ ಆನಂದ್. ಅಗರಖೇಡ ಝಳಕಿ.ಎಲ್ಲರು ಮತದಾರರ ಪಟ್ಟಿ ಪರಿಸ್ಕರಣೆಗೆ ಸಹಕರಿಸಿ, ನಿಜವಾದ ಮತದಾನ ಪಟ್ಟಿ ರೂಪಿಸಲು ಮತ್ತು ನಕಲಿ ಮತದಾನ ಹೋಗಲಾಡಿಸೋಣ ಎಂದು ಗ್ರಾಮದ ಮುಖಂಡರು ಭೀಮಾಶಂಕರ ವಾಲಿಕಾರ ಹೇಳಿದರು. ಬಳ್ಳೊಳ್ಳಿ ಗ್ರಾಮದಲ್ಲಿ ಗ್ರಾಮದ ಬಿ. ಎಲ್. ಓ ಮತ್ತು ಮುಖಂಡರ ಸಹಯೋಗದಲ್ಲಿ ಚಾಲನೆ ನೀಡಲಾಯಿತು. ಬಿಇ. ಎಲ್. ಓ ಸೋಮಶೇಖರ್ ಕಾಪಸೆ ಮಾತನಾಡಿ ಎನ್ಯೂಮರೇಶನ ಫಾರ್ಮನಲ್ಲಿ ಸರಿಯಾದ ಮಾಹಿತಿ ಕೊಡದೆ ಹೋದಲ್ಲಿ ನಿಮ್ಮ ಮತದಾನ ರದ್ದಾಗುವ ಸಂಭವವಿದ್ದು, ಎಲ್ಲರು ತಮ್ಮ ಮನೆಯ ಎಲ್ಲ ಸದಸ್ಯರ ಸರಿಯಾದ ಮಾಹಿತಿ ಕೊಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಹಜರತ ಮುಲ್ಲಾ, ಭೀರಪ್ಪ ಹಿರೇಕುರುಬರ, ಮಲ್ಲಿಕಾರ್ಜುನ ಹಿರೇಮಠ, ಸ್ನೇಹಾ ಹಿರೇಮಠ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply