Blog

  • ಗುಡಿಯಲ್ಲಿ ಕುಳಿತು ಗಣತಿ ಮಾಡುತ್ತಿರುವ:ಬಿ ಎಲ್ ಓ

    *ಇಂಡಿ:

    ಬಿ ಎಲ್ ಓ (Booth Level Officer) ಎಂದರೆ ಭಾರತೀಯ ಚುನಾವಣಾ ಆಯೋಗದ (ECI) ವತಿಯಿಂದ ನೇಮಕಗೊಂಡ ಬೂತ್ ಮಟ್ಟದ ಅಧಿಕಾರಿಯಾಗಿದ್ದಾರೆ.ಇವರು ಸ್ಥಳೀಯ ಸರ್ಕಾರಿ ನೌಕರರಾಗಿರುವ ಇವರು,ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿಯನ್ನು ನಿಖರವಾಗಿಡುವುದು, ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕುವುದು ಮತ್ತು ಚುನಾವಣಾ ಪ್ರಕ್ರಿಯೆಗಳು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುವುದು ಇವರ ಮುಖ್ಯ ಕರ್ತವ್ಯವಾಗಿದೆ. ಆದರೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ವಾರ್ಡ್ ನಂಬರ್ 7ರ ಬಿಎಲ್​ಓ ಲಕ್ಷ್ಮಣ್ ವಿಠೋಬಾ ಕೊಂಕಣಿ ಅವರು ತಮ್ಮ ಪ್ರಮುಖ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಮರೆತು ತಮಗೆ ಅನುಕೂಲವಾಗುವಂತೆ ತಡವಲಗಾ ಗ್ರಾಮದ ಕಕ್ಕಯ ಓಣಿಯಲ್ಲಿ ಇರುವ ಶ್ರೀ ಅಂಬಾಭವಾನಿ ಮಂದಿರದಲ್ಲಿ ಕುಳಿತು ಕಾರ್ಯನಿರ್ವಾಹಕ ಮಾಡುತ್ತಿರುವುದು ಕಂಡು ಬಂದಿದೆ. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ನೋಂದಣಿ:ಮನೆ-ಮನೆ ಸಮೀಕ್ಷೆ: ನಿಗದಿತ ನಮೂನೆ (ಫಾರಂ) ಗಳನ್ನು ಬಳಸಿಕೊಂಡು ಮನೆ-ಮನೆಗೆ ಖುದ್ದಾಗಿ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸುವುದು.ಹೊಸ ಮತದಾರರ ಸೇರ್ಪಡೆ: 18 ವರ್ಷ ತುಂಬಿದ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲು (ಫಾರಂ-6) ಸಹಾಯ ಮಾಡುವುದು.ಹೆಸರು ತೆಗೆದುಹಾಕುವುದು / ತಿದ್ದುಪಡಿ: ಮೃತಪಟ್ಟವರ ಅಥವಾ ಬೇರೆಡೆ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು (ಫಾರಂ-7) ಮತ್ತು ತಪ್ಪುಗಳಿದ್ದರೆ ತಿದ್ದುಪಡಿ ಮಾಡಲು (ಫಾರಂ-8) ಅರ್ಜಿಗಳನ್ನು ಸ್ವೀಕರಿಸುವುದು.ಆಧಾರ್ ಲಿಂಕ್: ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಿಸುವುದನ್ನು (ಫಾರಂ-6B) ಖಚಿತಪಡಿಸುವುದು.ಚುನಾವಣಾ ದಿನದ ಕರ್ತವ್ಯಗಳು:ಮತಗಟ್ಟೆ ನಿರ್ವಹಣೆ ಮತ್ತು ಮತದಾರರಿಗೆ ಮಾರ್ಗದರ್ಶನ ನೀಡುವುದು ಇವರ ಕರ್ತವ್ಯವಾಗಿದೆ.ಆದರೆ ಚುನಾವಣೆ ಆಯೋಗ ಎಲ್ಲ ಆದೇಶವನ್ನು ಗಾಳಿಗೆ ತೂರಿ ತಮ್ಮ ಹತ್ತಿರವೆ ಮತದಾರರು ಬರಬೇಕು ಎನ್ನುವಂತೆ ಕಾರ್ಯ ನಿರ್ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಇಂಡಿ ಉಪನೋಂದಣಿ ಕಚೇರಿ ಮೇಲೆ ಲೋಕಾಯುಕ್ತ ದಿಢೀರ ದಾಳಿ

    ವರದಿ. ✍️ಆನಂದ್.ಅಗರಖೇಡ

    ಇಂಡಿ

    ಇಂಡಿ ನಗರದ ಉಪ ನೋಂದಣಾಧಿಕಾರಿ (ಸಬ್‌ ರಿಜಿಸ್ಟ್ರಾರ್) ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.ದಾಳಿ ವೇಳೆ ಕಚೇರಿಯಲ್ಲಿ 50 ಸಾವಿರ ನಗದು ಪತ್ತೆಯಾಗಿದ್ದು,ಕಚೇರಿಗೆ ಸಂಬಂಧಿಸದ ಐವರು ವ್ಯಕ್ತಿಗಳನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.

    ದಾಳಿಯ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ದಾಖಲೆಗಳು, ಕಡತಗಳು ಹಾಗೂ ವಿವಿಧ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು. ಕಚೇರಿಯಲ್ಲಿ ಇದ್ದ ಕೆಲವು ಬಾಂಡ್ ರೈಟರ್‌ಗಳು ಹಾಗೂ ಏಜೆಂಟ್‌ಗಳ ಉಪಸ್ಥಿತಿಯ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.

    ಸಾರ್ವಜನಿಕರಿಂದ ಬಂದ ದೂರುಗಳು ಹಾಗೂ ಕಚೇರಿಯಲ್ಲಿ ನಡೆಯುತ್ತಿದ್ದ ಎನ್ನಲಾದ ಅಕ್ರಮಗಳ ಕುರಿತು ದೊರೆತ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ತನಿಖೆ ಇನ್ನೂ ಮುಂದುವರಿದಿದ್ದು, ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

  • ಕಚೇರಿಗೆ ಚಕ್ಕರ್ ಹಾಕಿ ಹೋಟೆಲ್‌ನಲ್ಲಿ ಕಾಲಹರಣ: ಆಲಮೇಲ ಆಹಾರ ನಿರೀಕ್ಷಕನ ವಿರುದ್ಧ ಜಿಲ್ಲಾಧಿಕಾರಿಗೆ ದೂರು!

    ವಿಜಯಪುರ : ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕಾದ ಅಧಿಕಾರಿಯೊಬ್ಬರು ಕಚೇರಿಗೆ ಬಾರದೆ ಹೋಟೆಲ್‌ನಲ್ಲಿ ಕಾಲಹರಣ ಮಾಡುತ್ತಿದ್ದಲ್ಲದೆ, ಪ್ರಶ್ನಿಸಿದ ಸಾರ್ವಜನಿಕರ ವಿರುದ್ಧ ಉದ್ಧಟತನ ತೋರಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಆಲಮೇಲ ತಾಲೂಕಿನ ಆಹಾರ ನಿರೀಕ್ಷಕರಾದ (Food Inspector) ರಮೇಶ್ ತಳವಾರ್ ಅವರ ವಿರುದ್ಧ ಈಗ ಜಿಲ್ಲಾಧಿಕಾರಿಗಳಿಗೆ ಗಂಭೀರ ದೂರು ಸಲ್ಲಿಕೆಯಾಗಿದೆ.​ಕಚೇರಿ ಇದ್ದರೂ ಸಿಂದಗಿಯಲ್ಲಿ ವಾಸ್ತವ್ಯ!​ಆಲಮೇಲ ತಹಶೀಲ್ದಾರ್ ಕಚೇರಿಯಲ್ಲಿ ಆಹಾರ ನಿರೀಕ್ಷಕರಿಗೆ ಕುಳಿತು ಕೆಲಸ ಮಾಡಲು ಪೀಠೋಪಕರಣ ಸೇರಿದಂತೆ ಎಲ್ಲಾ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಆದರೆ, ಈ ಅಧಿಕಾರಿಯು ಮಾತ್ರ ಆಲಮೇಲ ಕಚೇರಿಗೆ ಬಾರದೆ ಸಿಂದಗಿಯಲ್ಲೇ ಬೀಡು ಬಿಟ್ಟಿರುತ್ತಾರೆ. ಈ ಕುರಿತು ಸಾರ್ವಜನಿಕರು ಫೋನ್ ಮಾಡಿ ವಿಚಾರಿಸಿದರೆ, “ವಿಜಯಪುರ ಜಿಲ್ಲಾ ಕಚೇರಿಗೆ ಹೋಗಿದ್ದೆ” ಅಥವಾ “ಗೋದಾಮಿನಲ್ಲಿ (ದಾಸ್ತಾನು ಕೋಣೆ) ಕೆಲಸವಿತ್ತು” ಎಂದು ನೆಪಗಳನ್ನು ಹೇಳುತ್ತಾ ಕಚೇರಿಗೆ ಬಾರದೆ ಸತಾಯಿಸುತ್ತಿದ್ದಾರೆ ಎಂದು ಅಂಬೇಡ್ಕರ್ ಸೇನೆ ಸಂಘಟನೆ ಆರೋಪಿಸಿದೆ.

  • ಮುಂಗಾರಿನ ಬಿತ್ತನೆ ಬಿಜಗಳ ಖರಿದಿಗೆ ಮುಗಿಬಿದ್ದ ರೈತರು.

    ವರದಿ. ಆನಂದ್. ಅಗರಖೇಡ ಝಳಕಿ

    ಬರಗಾಲದ ಅಂಜಿಕೆಯಂದಾಗಿ ರೈತ ಬಿತ್ತನೆ ಬಿಜಗಳು ರೈತ ಸಂಪರ್ಕ ಕೆಂದ್ರ ವಿತರಣೆ ಪ್ರಾರಂಭಿಸಿದ್ದರು ಇತ್ತ ಇಣುಕಿದ್ದಿಲ್ಲ , ಎರಡು ದಿನಗಳು ಸುರಿದ ಮಳೆಗೆ ರೈತನ ಮೊಗದಲ್ಲಿ ಮೂಡಿದ ಮಂದಹಾಸ, ಇವಾಗ ಬಳ್ಳೊಳ್ಳಿ ರೈತ ಸಂಪರ್ಕ ಕೆಂದ್ರದತ್ತ ಎಲ್ಲ ಗ್ರಾಮಗಳಿಂದ ರೈತರು ಧಾವಿಸಿ ಬರುತಿದ್ದಾರೆ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ನರಸಪ್ಪ ಹಿಟ್ನಳ್ಳಿ ತಿಳಿಸಿದರು.ಬಳ್ಳೊಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಬಿಜಗಳ ಖರಿದಿಗೆ ಮುಗಿಬಿದ್ದ ರೈತರು. ಬಿಜಗಳು ಕೊಡಬೆಕಾದರೆ ಕೇವಲ ಆಧಾರ ಕಾರ್ಡ ತಂದರೆ ಸಾಕು ಕೊಡಲಾಗುವದು ಮತ್ತು ಬಿಜಗಳನ್ನು ಆನ್ಲೈನ್ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕೊಡುವದರಿಂದ ಸ್ವಲ್ಪ ಮಟ್ಟಿಗೆ ವಿಳಂಬವಾಗುತಿದ್ದು, ರೈತರು ಸರದಿಯಾಗಿ, ಸಹನೆಯಿಂದ, ಶಾಂತತೆ ಕಾಪಾಡಿದಾಗ ಸಿಬ್ಬಂದಿಗಳು, ವಿತರಣೆ ಮಾಡಲು ಸರಳವಾಗುತ್ತದೆ, ತೋಗರೆ ಬಿಜ (ಟಿ.ಎಸ್೩ ಆರ್), ಮೆಕ್ಕೆಜೋಳದಲ್ಲಿ ರಾಯಲ್ ಗೊಲ್ಡ, ಕಾವೇರಿ, ಸಿನಜೇಂಟಾ, ಗಂಗಾ ಕಾವೇರಿ, ವರ್ಷಾ ಅಗ್ರೋ, ನ್ಯೂಜಿನ್ಸ, ಬಸಗಿನ್ನಿ, ಮಾದರಿಯ ಬಿಜಗಳು ಲಭ್ಯವಿದೆ ಎಂದರು.

  • ಬಳ್ಳೊಳ್ಳಿ ಗ್ರಾಮದಲ್ಲಿ ಮತದಾರರ ಮತ ಪಟ್ಟಿ ಪರಿಸ್ಕರಣೆ ಚಾಲನೆ.

    ವರದಿ ಆನಂದ್. ಅಗರಖೇಡ ಝಳಕಿ.ಎಲ್ಲರು ಮತದಾರರ ಪಟ್ಟಿ ಪರಿಸ್ಕರಣೆಗೆ ಸಹಕರಿಸಿ, ನಿಜವಾದ ಮತದಾನ ಪಟ್ಟಿ ರೂಪಿಸಲು ಮತ್ತು ನಕಲಿ ಮತದಾನ ಹೋಗಲಾಡಿಸೋಣ ಎಂದು ಗ್ರಾಮದ ಮುಖಂಡರು ಭೀಮಾಶಂಕರ ವಾಲಿಕಾರ ಹೇಳಿದರು. ಬಳ್ಳೊಳ್ಳಿ ಗ್ರಾಮದಲ್ಲಿ ಗ್ರಾಮದ ಬಿ. ಎಲ್. ಓ ಮತ್ತು ಮುಖಂಡರ ಸಹಯೋಗದಲ್ಲಿ ಚಾಲನೆ ನೀಡಲಾಯಿತು. ಬಿಇ. ಎಲ್. ಓ ಸೋಮಶೇಖರ್ ಕಾಪಸೆ ಮಾತನಾಡಿ ಎನ್ಯೂಮರೇಶನ ಫಾರ್ಮನಲ್ಲಿ ಸರಿಯಾದ ಮಾಹಿತಿ ಕೊಡದೆ ಹೋದಲ್ಲಿ ನಿಮ್ಮ ಮತದಾನ ರದ್ದಾಗುವ ಸಂಭವವಿದ್ದು, ಎಲ್ಲರು ತಮ್ಮ ಮನೆಯ ಎಲ್ಲ ಸದಸ್ಯರ ಸರಿಯಾದ ಮಾಹಿತಿ ಕೊಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಹಜರತ ಮುಲ್ಲಾ, ಭೀರಪ್ಪ ಹಿರೇಕುರುಬರ, ಮಲ್ಲಿಕಾರ್ಜುನ ಹಿರೇಮಠ, ಸ್ನೇಹಾ ಹಿರೇಮಠ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

  • ಬಳ್ಳೊಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಕಾರ ಹುಣ್ಣಿಮೆ ಆಚರಣೆ.

    ವರದಿ. ಆನಂದ. ಅಗರಖೇಡ

    ಝಳಕಿ. ಪ್ರತಿ ವರ್ಷದಂತೆ ಈ ವರ್ಷಕೂಡಾ ಬಳ್ಳೊಳ್ಳಿ ಗ್ರಾಮದಲ್ಲಿ ರೈತರು ಎತ್ತುಗಳನ್ನು ಶೃಂಗಾರ್ ಮಾಡಿ, ಸಂಪ್ರದಾಯಕವಾಗಿ, ಶಾಂತರೀತಿಯಲ್ಲಿ ಕಾರ ಹುಣ್ಣಿಮೆ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ರೈತರಾದ ಸುರೇಶ ಪಾಟೀಲ, ಪ್ರಕಾಶ ತುಪ್ಪದ, ರಮೇಶ ತುಪ್ಪದ, ಸುನಿಲ್ ಪಾಟೀಲ, ಶಂಕರ ಬಡಿಗೇರ, ಕಾಮಣ್ಣಗೌಡ ಬಿರಾದಾರ, ಸದಾಶಿವ ರೇವತಗಾಂವ, ರೇವಣಸಿದ್ಧ ಶಿರಷ್ಯಡ, ವಿಠಲ್ ಶಿರಶ್ಯಾಡ, ಹಾಗು ಗ್ರಾಮದ ಎಲ್ಲ ರೈತರು ಮುಖಂಡರು ಉಪಸ್ಥಿತರಿದ್ದರು.

  • ಸನ್ಸೂರ ಸೋಲಾರ ಪಾರ್ಕ ಪಾರ್ಟಿಸೆವೆನ್ ಪ್ರೈವೇಟ್ ಲಿಮಿಟೆಡ್ (ವಿಂಡಪ್ಯಾನ್) ಕಂಪನಿಯಿಂದ ರೈತರಿಗೆ ಆಗಿರುವ ಮೋಸದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ

    ವಿಜಯಪುರ : ದೇವರಹಿಪ್ಪರಗಿತಾಲೂಕಿನ ಕೋರವಾರ ಗ್ರಾಮದಲ್ಲಿಸನ್ಸೂರ ಸೋಲಾರ ಪಾರ್ಕ ಪಾರ್ಟಿಸೆವೆನ್ ಪ್ರೈವೇಟ್ ಲಿಮಿಟೆಡ್ (ವಿಂಡಪ್ಯಾನ್) ಕಂಪನಿಯಿಂದ ರೈತರಿಗೆ ಆಗಿರುವ ಮೋಸದ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಂಡು ಹಾಗೂ ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ ಅವರಿಗೆ ಮನವಿ ಸಲ್ಲಿಸಿದರು.ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಕೋರವಾರ ಗ್ರಾಮದಲ್ಲಿ ಸನ್ಸೂರ ಸೋಲಾರ ಪಾರ್ಕ ಪಾರ್ಟಿಸೆವೆನ್ ಪ್ರೆöÊವಿಟ್ಲಿಮಿಟೆಡ (ವಿಂಡಪ್ಯಾನ್) ಕಂಪನಿಯಿAದ ಸುಮಾರು ೧೦ ವಿಂಡ್ ಪ್ಯಾನ್‌ಗಳನ್ನುಅಳವಡಿಸಿದ್ದು, ಅದರಲ್ಲಿ ಒಂದು ಎಕರೆ ಖರೀಧಿ ಹಾಗೂ ಉಳಿದಂತೆ ೬-೭ ಎಕರೆ ೨೯ವರ್ಷ ೧೧ ತಿಂಗಳಿಗೆ ಬಾಡಿಗೆ ತೆಗೆದುಕೊಳ್ಳುತ್ತೆನೆಂದು ಕರಾರುಮಾಡಿಕೊಳ್ಳುವುದಾಗಿ ಮುಗ್ದ ರೈತರಿಗೆ ಮಧುವರ್ತಿಗಳ ಮೂಲಕಒಪ್ಪಿಸಿದ್ದಾರೆ.ಆದರೆ ಬಾಡಿಗೆ ತೆಗೆದುಕೊಳ್ಳುವುದಾಗಿ ಹೇಳಿ ಪವರ್ ಆಫ್ ಅಟಾರ್ನಿಪತ್ರಗಳಿಗೆ ಬಸವನ ಬಾಗೇವಾಡಿ ಉಪನೋಂದಣಿ ಕಚೇರಿಯಲ್ಲಿ ಸಹಿಹಾಕಿಸಿಕೊಂಡಿದ್ದಾರೆ, ಇಲ್ಲಿ ಇಂಗ್ಲಿಷನಲ್ಲಿ ಇರುವ ನೂರಾರು ದಾಖಲಾತಿಗಳಿಗೆ ಸಹಿಮಾಡಿಸಿಕೊಂಡಿರುವ ವಿಂಡ್ ಪ್ಯಾನ್ ಕಂಪನಿಯವರು ಬಾಡಿಗೆತೆಗೆದುಕೊಳ್ಳುತ್ತೆನೆ ಎಂದು ಹೇಳಿರುವ ಭೂಮಿಗಳನ್ನು ಕೈಗಾರಿಕೆಅಥವಾ ಕೃಷಿಯೇತ್ತರ ಉದ್ದೇಶಕ್ಕಾಗಿ ಬಿನ್ ಶೆತ್ಕಿ ಪತ್ರ ಲಗುತ್ತಿಸಿ ಭೂಪರಿವರ್ತನೆ (ಎನ್.ಎ) ಮಾಡಿಕೊಳ್ಳುತ್ತಿರುವುದಾಘಿ ತಿಳಿದು ಬಂದಿದೆ.ಇದರಿAದ ರೈತರಿಗೆ ಸರಕಾರದ ಯಾವುದೇಯೋಜನೆಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ ಜೊತೆಗೆ ಯಾವುದೇಸಾಲ ಪಡೆಯಲು ಕೂಡಾ ಬರುವುದಿಲ್ಲ. ವಿಂಡ್ ಪ್ಯಾನ್ ಕಂಪನಿಯವರು ಬಾಡಿಗೆಪಡೆದ ಭೂಮಿ ಮೇಲೆ (ಎನ್.ಎ) ಆಗಿದೆ ಎಂದು ಸರಕಾರಿ ಅಥವಾ ಖಾಸಗಿ ಬ್ಯಾಂಕಅಥವಾ ಹೊರಗಡೆ ಸಾಲ ತೆಗೆದುಕೊಂಡು ತುಂಬದಿದ್ದರೆ ಅಥವಾ ಕಂಪನಿದೀವಾಳಿಯಾದರೆ ರೈತರು ಬೀದಿಗೆ ಬರಬೇಕಾಗುತ್ತದೆ, ಕೂಡಲೇ ಸದರಿಜಮೀನುಗಳ ಮೇಲೆ ಪಡೆದುಕೊಂಡಿರುವ ಕೊಟ್ಟಿ ಪವರ್ ಆಫ್ಅಟಾರ್ನಿಯನ್ನು ರದ್ದು ಪಡೆಸಬೇಕು, ಮುಂದೆಯೂ ಕೂಡಾ ಯಾವರೈತರಿಗೂ ಈ ರೀತಿ ಅನ್ಯಾಯ ವಾಗಬಾರದು ಎಂದು ಈ ಮೂಲಕ ವಿನಂತಿಪೂರ್ವಕವಾಗಿ ಕೇಳಿಕೊಳ್ಳುತ್ತೆವೆ ಎಂದರು.ಇಲ್ಲವಾದಲ್ಲಿ ಮೋಸಹೋದ ರೈತರೊಂದಿಗೆ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೋರಾಟ ಮಾಡಲಾಗುವುದುಇದರ ಜೊತೆಗೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿ ನ್ಯಾಯಸಿಗುವವರೆಗೂ ಆ ಪ್ಯಾನ್‌ಗಳನ್ನು ಪ್ರಾರಂಭಿಸಬಾರದು ಎಂದು ಈ ಮೂಲಕಒತ್ತಾಯಿಸುತ್ತೆವೆ ಎಂದರು.ಅದೇರೀತಿ ಸರ್ಕಾರದ ಮಾಗ್ಸೂಚಿಯನ್ನು ಗಾಳಿಗೆ ತೂರಿ,ಸಂಬಂಧಿಸಿದ ಹಲವಾರು ಇಲಾಖೆಗಳ ಅನುಮತಿ ಪಡೆಯಬೇಕಿರುವ ಇವರು ದಾಬ್ಬಾಳಿಕೆ ಮಾಡಿ ಮುನ್ನುಗುತ್ತಿದ್ದಾರೆ, ಸರ್ಕಾರಕ್ಕೆಕಟ್ಟಬೇಕಿರುವ ತೆರಿಗೆ ಸಹ ಕಟ್ಟುತಿಲ್ಲ, ಇದನ್ನು ಕೂಡಾ ಜಿಲ್ಲಾಧಿಕಾರಿಗಳುಗಮನ ಹರೆಸಬೇಕು ಮತ್ತು ಜಿಲ್ಲೆಯಲ್ಲಿ ೩೩% ಪ್ರತಿಶತ ಇರಬೇಕಿರುವಅರಣ್ಯ ಕೇವಲ ೨ % ಇದೆ, ಇದನ್ನು ಗಮನದಲ್ಲಿಕೊಂಡು ಯಾವುದೇ ವಿಂಡಹಾಗೂ ಸೋಲಾರ ಘಟಕಗಳಲಿಗೆ ಅನುಮತಿ ನೀಡಬಾರದು ಎಂದು ಈಮೂಲಕ ಮನವಿ ಮಾಡಿಕೊಳ್ಳುತ್ತೆವೆ ಎಂದರು.ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ, ರಾಜ್ಯಉಪಾಧ್ಯಕ್ಷರಾದ ಕಲ್ಲು ಸೋನ್ನದ, ದೇವರ ಹಿಪ್ಪರಗಿ ತಾಲೂಕಾಅಧ್ಯಕ್ಷರಾದ ಈರಪ್ಪ ಕುಳೆಕುಮಟಗಿ, ದೇವರ ಹಿಪ್ಪರಗಿ ತಾಗೌರವಾಧ್ಯಕ್ಷರಾದ ಶಿವಾನಂದಯ್ಯ ಹಿರೇಮಠ, ಬಾಗೇವಾಡಿ ತಾ ಅಧ್ಯಕ್ಷರಾದಮುದಕಣ್ಣ ಹೋರ್ತಿ, ಮಲ್ಲನಗೌಡ ಬಿರಾದಾರ, ಮಲ್ಲನಗೌಡಛಾಯಾಗೋಳ, ಮಹಾಂತಗೌಡ ಪಾಟೀಲ, ಬಾಬು ಘೋರಪಡೆ, ಬೀಮನಗೌಡಪಾಟೀಲ, ಸೋಮಶೇಖರ ತಾಳಿಕೋಟಿ , ಭೀಮರಾಯ ಜಾಧವ ಸೇರಿದಂತೆಇತರ ರೈತರು ಇದ್ದರು,

  • ಗಾಣದೇವತೆ ಉತ್ಸವ ಮುಂದುವರಿಸಿಕೊಂಡು ಹೋಗುವುದು ಅವಶ್ಯಕವಾಗಿದೆ -ನ್ಯಾಯವಾದಿ ಶ್ರೀಶೈಲ ಸಜ್ಜನ

    ವಿಜಯಪುರ : ಗಾಣದೇವತಾ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾ ಗಾಣಿಗ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಗರದ ವನಶ್ರೀ ಮಠದ ಆವರಣದಲ್ಲಿ ಹಮ್ಮಿಕೊಡಿದ್ದ ಗಾಣದೇವತಾ ಉತ್ಸವದಲ್ಲಿ ನಾಡಿಗೆ ಮಳೆ ಬೆಳೆ ಬರಲಿ, ವಿದೇಶಗಳಲ್ಲಿರುವವರು ಸುರಕ್ಷಿತವಾಗಿ ತಾಯಿ ನಾಡಿಗೆ ಮರಳಲಿ ಎಂದು, ಸಮಾಜ ಬಂಧುಗಳಿಗೆ ಒಳಿತನ್ನುಂಟು ಮಾಡಲಿಯೆಂದು, ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಹಾಗೂ ಧಾರವಾಡ ಕೃಷಿ ವಿ ವಿ ಗೆ ಡಾ ಅಶೋಕ ಸಜ್ಜನ ಅವರಿಗೆ ಉಪಕುಲಪತಿ ಹುದ್ದೆ ದೊರೆಯಲಿ ಎಂದು ಗಾಣದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

    ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಚಾಲಕರಾದ ನ್ಯಾಯವಾದಿ ಶಿಶೈಲ ಸಜ್ಜನ ಅವರು ಮಾತನಾಡಿ ಗ್ರಾಮದೇವತೆ ಗ್ರಾಮಕ್ಕೆ ಒಳಿತನ್ನುಂಟು ಮಾಡಿದರೆ ಗಾಣದೇವತೆ ತನ್ನ ಒಡಲೊಳಗಿನ ಎಣ್ಣೆಯನ್ನು ಧಾರೆಯೆರೆದು ಬೆಳಕು ನೀಡಿ ಲೋಕಕ್ಕೆ ಒಳಿತನ್ನುಂಟು ಮಾಡುತ್ತಾಳೆ ಎಂದು ಹೇಳಿದರು.

    ಗಾಣದೇವತೆಗೆ ಪುರಾತನ ಕಾಲದಿಂದ ಪೂಜಿಸುತ್ತಾ ಬರಲಾಗುತ್ತಿದೆ. ಕಾಲ ಬದಲಾದಂತೆ ಧಾರ್ಮಿಕ ಆಚರಣೆಗಳಿಂದ ಜನ ದೂರ ಸರಿಯುತ್ತಿದ್ದಾರೆ ನಮ್ಮ ಜನಪದ ಆಚರಣೆ,ಧಾರ್ಮಿಕ ಪರಂಪರೆಯಾದ ಗಾಣದೇವತೆ ಉತ್ಸವ ಮುಂದುವರೆಸಿಕೊಂಡು ಹೋಗುವುದು ಇಂದು ಅತ್ಯಂತ ಅವಶ್ಯಕವಾಗಿದೆ ಎಂದರು.

    ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶಿವಣಗಿಯ ಗುರುದೇವಾಶ್ರಮದ ಶಿವಲಿಂಗ ಸ್ವಾಮಿಗಳು ಧರ್ಮ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಗಾಣದೇವತೆಯನ್ನು ಪೂಜಿಸುವವರು ಸದಾ ಕಾಲ ದೇವತೆಯ ಕೃಪೆಯಿಂದ ಬೆಳಕಿನಲ್ಲಿ ಇರುತ್ತಾರೆ,ಸಮಾಜದ ಪ್ರತಿಯೊಬ್ಬರು ಲಿಂಗ ದೀಕ್ಷೆ ಪಡೆದುಕೊಂಡು ತತ್ವನಿಷ್ಟ ಜೀವನ ಸಾಗಿಸಬೇಕು ಎಂದು ಹೇಳಿದ ಅವರು ಗಾಣದೇವತೆ ಉತ್ಸವ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದರು.

    ಕಾರ್ಯಕ್ರಮದಲ್ಲಿ ವನಶ್ರೀ ಸಂಸ್ಥಾನ ಮಠದ ಲಿಂಗೈಕ್ಯ ಜಯದೇವ ಜಗದ್ಗುರುಗಳ ಪ್ರಣವವ ಮಂಟಪಕ್ಕೆ ಪೂಜೆ ಸಲ್ಲಿಸಿ ಪಂಚಾಕ್ಷರಿ ಮಂತ್ರ ಪಠಣ ಮಾಡಿ ಸಹಸ್ರ ಬಿಲ್ವಾರ್ಚನೆಗೈಯ್ಯಲಾಯಿತು.

    ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಪಂಚಾಯತ ಎದುರಿಗೆ ಇರುವ ವನಶ್ರೀ ವೃತ್ತದಿಂದ ಕಾರ್ಯಕ್ರಮದ ವೇದಿಕೆಯವರೆಗೆ ಗಾಣದೇವತೆ ಮೆರವಣಿಗೆ ಮೆರವಣಿಗೆ ನಡೆಯಿತು.

     ಇದೇ ಸಂದರ್ಭದಲ್ಲಿ 101 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

    ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ಅಧ್ಯಕ್ಷ ಬಿ ಕೆ ಪಾಸೋಡಿ ಮುಖಂಡರಾದ ಶರಣಪ್ಪ ಶಹಾಪೇಟಿ, ಮಲ್ಲಿಕಾರ್ಜುನ ಲೋಣಿ, ನ್ಯಾಯವಾದಿ ಶ್ರೀಕಾಂತ ಶಿರಾಡೋಣ, ಈರಣ್ಣ ಬಿಷ್ಟಗೊಂಡ,ಶ್ರೀಶೈಲ ಗಡಗಿ, ಗುರುಸಿದ್ದಪ್ಪ ಸಜ್ಜನ,ಗುರುರಾಜ ಸಜ್ಜನ ಇಂಗಳಗಿ , ಬಸು ಹಳ್ಳಿ, ರಾಜಶೇಖರ ಸಜ್ಜನ ಡೋಣೂರ, ಶರಣು ಸಜ್ಜನ,ನ್ಯಾಯವಾದಿ ಬಸವರಾಜ ಸಜ್ಜನ,ವಿಜಯಕುಮಾರ ಶಿರಶ್ಯಾಡ ಸೇರಿದಂತೆ ವಿವಿಧ ಗಣ್ಯರು ಗಾಣಿಗ ಸಮಾಜದ ಮುಖಂಡರು ಉಪಸ್ಥಿತರಿದ್ದರು

  • ಝಳಕಿ ಗ್ರಾಮದಲ್ಲಿ ಮನೆ ಮನೆಗೆ , ಶಾಲಾ ಆವರಣದಲ್ಲಿ, ವಾರ್ಡಗಳಿಗೆ ತೆರಳಿ ಪೋಲಿಯೋ ಲಸಿಕೆ ಕೊಡಲಾಯಿತು.

    ವರದಿ. ಆನಂದ. ಅಗರಖೇಡ

    ಝಳಕಿ : ಪೋಲಿಯೋ ಕೇವಲ ಒಂದು ಔಷಧಿ ಅಲ್ಲಾ ನಮ್ಮ ಜೀವನದ ಅಮೃತ, ಮುಂದಿನ ಜೀವನದಲ್ಲಿ ಆರೋಗ್ಯದಲ್ಲಿ ಆಗುವ ಹಲವಾರು ಅನಾಹುತಗಳಿಗೆ ರಾಮಬಾಣ ಇದ್ದಂತೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ಹೇಳಿದರು. ಝಳಕಿ ಗ್ರಾಮದಲ್ಲಿ ಝಳಕಿ ಅರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರ ಸಹಯೋಗದಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಕಾಶ ಪಾಟೀಲ, ರವಿಕುಮಾರ ಹೂಗಾರ, ಗಂಗಾಧರ ಹೂಗಾರ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು