Blog

  • ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವಿಜಯಪುರ–1 ಮತ್ತು 2 ತಾಲೂಕಿನ ನೇತೃತ್ವದಲ್ಲಿಜ್ಞಾನವಿಕಾಸ ಸಂಯೋಜಕಿಯರ ಕ್ರಿಯಾಯೋಜನೆ ಸಭೆ

    ವಿಜಯಪುರ : ಜಿಲ್ಲೆಯ ವಿಜಯಪುರ–1 ಹಾಗೂ –2 ತಾಲೂಕುಗಳ ಜ್ಞಾನವಿಕಾಸ ಸಂಯೋಜಕಿಯರ ಕ್ರಿಯಾಯೋಜನೆ ಸಭೆಯನ್ನು ನಗರದ ರುಡ್‌ಸೆಟ್ (RUDSET ಸಂಸ್ಥೆಯ ಸಭಾರಣದಲ್ಲಿ ಹಮ್ಮಿಕೊಳ್ಳಲಾಯಿತು.

    ಈ ಕಾರ್ಯಕ್ರಮಕ್ಕೆ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಮೋಹನ್ ನಾಯಕ್, ವಿಜಯಪುರ–2 ಯೋಜನಾಧಿಕಾರಿಗಳಾದ ಶ್ರೀ ಸತೀಶ್, ವಿಜಯಪುರ–1 ಯೋಜನಾಧಿಕಾರಿಗಳಾದ ಶ್ರೀ ಕಲ್ಲನಗೌಡ, ಜ್ಞಾನವಿಕಾಸ ಸಮನ್ವಯಾಧಿಕಾರಿಗಳು ಹಾಗೂ ಜ್ಞಾನವಿಕಾಸ ಸಂಯೋಜಕಿಯರು ಉಪಸ್ಥಿತರಿದ್ದರು.

    ಈ ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕರು ಮತ್ತು ಎರಡು ತಾಲೂಕಿನ ಯೋಜನಾಧಿಕಾರಿಗಳು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.ನಂತರ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಮೋಹನ್ ನಾಯಕ್ ಅವರು ಜ್ಞಾನವಿಕಾಸ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಶಿಕ್ಷಣದ ಮಹತ್ವ, ಆರೋಗ್ಯ ಮತ್ತು ನೈರ್ಮಲ್ಯದ ಅರಿವು, ಮಹಿಳಾ ಹಕ್ಕುಗಳು, ಸರ್ಕಾರಿ ಯೋಜನೆಗಳ ಸದುಪಯೋಗ, ಹೊಸ ರುಚಿ ಪ್ರಾತ್ಯಕ್ಷಿಕೆ, ಕೌಶಲ್ಯ ದಿನ, ವಾತ್ಸಲ್ಯ ಕಾರ್ಯಕ್ರಮ, ನಾನು ಓದಿದ ಪುಸ್ತಕ, ಅಜ್ಜಿಯ ಕೈತುತ್ತು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಪ್ರತಿ ತಿಂಗಳ ಮಾಸಿಕ ಸಭೆಯಲ್ಲಿ ಕಡ್ಡಾಯವಾಗಿ ಹಮ್ಮಿಕೊಳ್ಳುವ ಕುರಿತು ಮಾಹಿತಿ ನೀಡಿದರು.ಅಲ್ಲದೆ ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ ಶಿಬಿರ, ಸ್ವಉದ್ಯೋಗ ಪ್ರೇರಣಾ ಶಿಬಿರ, ಮಹಿಳಾ ವಿಚಾರಗೋಷ್ಠಿ, ಅಧ್ಯಯನ ಪ್ರವಾಸ ಹಾಗೂ ಕೇಂದ್ರಗಳ ವಾರ್ಷಿಕೋತ್ಸವ ಕಾರ್ಯಕ್ರಮಗಳ ಕುರಿತು ಸಮಗ್ರ ಮಾರ್ಗದರ್ಶನ ನೀಡಿದರು.ತದನಂತರ ವಿಜಯಪುರ–2 ಯೋಜನಾಧಿಕಾರಿಗಳಾದ ಶ್ರೀ ಸತೀಶ್ ಅವರು ಯೋಜನೆಯ ಯೂಟ್ಯೂಬ್ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡುವಿಕೆ, ವಿನಿಯೋಗದರ ಬದಲಾವಣೆ ಹಾಗೂ ಕೇಂದ್ರಗಳ ದಾಖಲಾತಿಗಳ ಸಮರ್ಪಕ ನಿರ್ವಹಣೆ ಕುರಿತು ಮಾಹಿತಿ ನೀಡಿದರು.ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಜ್ಞಾನವಿಕಾಸ ಸಂಯೋಜಕಿಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

  • 18ರಂದು ಪೋಲಿಯ ಪೋಲಿಯೋ ದಿನಾಚರಣೆಯ ನಿಮಿತ್ಯ ಎಲ್ಲ ಗ್ರಾಮಗಳಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮ.

    ಝಳಕಿ : ಇಂದು ಝಳಕಿ ವಲಯದ ಎಲ್ಲ ಗ್ರಾಮಗಳಿಗೆ ಆಶಾ ಕಾರ್ಯಕರ್ತರು ಮತ್ತು ಅರೋಗ್ಯ ಇಲಾಖೆಯ ಸಿಬ್ಬಂದಿಗಳು ಪ್ರತಿ ಗ್ರಾಮಕ್ಕೆ ಬಂದು 5 ವರ್ಷದ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಿದ್ದಾರೆ, ಇದನ್ನು ಎಲ್ಲ ಪಾಲಕರು, ಮುಖಂಡರು ತಮ್ಮ ತಮ್ಮ ಗ್ರಾಮದಲ್ಲಿ ಪೋಲಿಯೋ ಲಸಿಕೆ ಎಲ್ಲರಿಗೆ ತಲುಪುವಂತೆ ಯೋಜನೆ ರೂಪಿಸಿಕೊಳ್ಳುವತೆ ಝಳಕಿ ಅರೋಗ್ಯ ಅಧಿಕಾರಿಗಳು ಸತೀಶ ಪಾಟೀಲ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

  • ಬಳ್ಳೊಳ್ಳಿ ಗ್ರಾಮದ ನಾಡ ಕಚೇರಿಯಲ್ಲಿ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಆಚರಣೆ

    ಝಳಕಿ : ಹಿರಿಯ ಕೆಂಪೇಗೌಡರು (೧೫೧೦–೧೫೬೯) ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು, ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಇಂದು ಕರ್ನಾಟಕ ರಾಜ್ಯದ ರಾಜಧಾನಿಯಾಗಿದೆ ಎಂದುಕಂದಾಯ ನೀರಿಕ್ಷಕರು ಬಳ್ಳೊಳ್ಳಿ ಪಿ. ಜೆ. ಕೊಡಹೊನ್ನ ಮಾತನಾಡಿದರು.

    ಬಳ್ಳೊಳ್ಳಿ ಗ್ರಾಮದ ನಾಡ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಆಚರಣೆ ಸಂಪ್ರದಾಯಕ, ಕಾನೂನಾತ್ಮಕವಾಗಿ ಆಚರಣೆಮಾಡಲಾಯಿತು. ನಮ್ಮ ದೇಶದ, ರಾಜ್ಯದ ವಳಿತಿಗಾಗಿ ಹೋರಾಡಿದ ಹಲವಾರು ಗಣ್ಯರ ಆಚರಣೆಗಳು ನಾವು ಮಾಡುತ್ತೇವೆ, ಆದರೆ ಅವರ ತತ್ವ, ಆದರ್ಶ್ ಪಾಲಿಸಲು ಹಿಂದೇಟು ಹಾಕುವದು ಯಾಕೆ?, ನಾವುಗಳು ನಮ್ಮ ಯುವ ಪೀಳಿಗೆಗೆ ನಮ್ಮ ಹಿರಿಯರ ಆದರ್ಶಗಳನ್ನು ಪಾಲಿಸುವಂತೆ ಕಳಿಸೋದು ನಮ್ಮ ಆದ್ಯ ಕರ್ತವ್ಯ, ಇವತ್ತು ಎಲ್ಲೆಂದರಲ್ಲಿ ಕೊಲೆ, ಸುಲಿಗೆ, ದರೋಡೆ, ಅಸೂಹೆತನ, ಇದಕ್ಕೆಲ್ಲ ಕಾರಣ ನಮ್ಮಲ್ಲಿರುವ ಸಂಸ್ಕಾರದ ಕೊರತೆ, ಇದನ್ನು ಹೋಗಲಾಡಿಸಿದಾಗ ಮತ್ತೆ ಹಳೆಯ ದಿನಗಳನ್ನು ಕಾಣಲು ಸಾಧ್ಯ, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವುಗಳು ಸಂಕಷ್ಟಕ್ಕೆ ಸಿಲುಕೋದು ಸಹಜ ಎಂದರು. ಈ ಸಮಯದಲ್ಲಿ ಕಂಪ್ಯೂಟರ್ ಆಪರೇಟರ ಮಂಜುನಾಥ್ ಬನಸೋಡೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • *ತಡವಲಗಾದಲ್ಲಿ ಅದ್ದೂರಿಯಾಗಿ ಮೊಹರಂ ಆಚರಣೆ*

    ಇಂಡಿ: ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಹಿಂದೂ ಮುಸ್ಲಿಂರ ಭಾವೈಕ್ಯತೆಯ ಹಾಗೂ ಏಕತೆಯ ಮೊಹರಂ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹಬ್ಬದ ಅಂಗವಾಗಿ ಹಿಂದೂ–ಮುಸ್ಲಿಂ ಸಮುದಾಯದವರು ಸೇರಿ ಸಾಮೂಹಿಕವಾಗಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಪ್ರತಿ ವರ್ಷ ಅಮಾವಾಸ್ಯೆಯ ಆದ ಮರುದಿನ ಚಂದ್ರಾಮ ಕಾಣುತ್ತಿದ್ದಂತೆ ಮುಸ್ಲಿಂ ಸಮುದಾಯದವರು ಗ್ರಾಮಗಳಲ್ಲಿ ಇರುವ ಮಸೀದಿಗಳ ಮುಂಬಾಗದಲ್ಲಿ ಗುದ್ದಲಿಗಳನ್ನು ಮುಂಚಿ ಇಡುತ್ತಾರೆ.ಮರು ದಿನ ಹಿಂದೂ–ಮುಸ್ಲಿಂ ಸಮುದಾಯದ ಜನರು ಸೇರಿ ಫಂಜೆ ಹಾಗೂ ಡೊಲಗಳನ್ನು ಕೂಡಿಸುತ್ತಾರೆ. ಹಾಗೂ ವಿವಿಧ ಬಗೆಯ ಕಾಗದ ಬಣ್ಣಗಳಿಂದ ಅಲಂಕರಿಸಿ ಹನ್ನೊಂದು ದಿನಗಳ ಕಾಲ ಭಕ್ತಿ ಪೂರ್ವಕವಾಗಿ ಪೂಜ್ಯಸುತ್ತಾರೆ. ಹತ್ತನೇ ದಿವಸ ಗ್ರಾಮದ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಸಿಹಿ ಅಡುಗೆಯನ್ನು (ಮಾದಲಿ) ಮಾಡಿ ನೆವಿಧ್ಯವನ್ನು ದೇವರಿಗೆ ಅರ್ಪಿಸುತ್ತಾರೆ.ಹನ್ನೋಂದನೆ ದಿವಸ ಗ್ರಾಮದ ಎಲ್ಲಾ ಸರ್ವ ಜನರು ಸೇರಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾದ.ಎಲ್ಲಾ ಡೋಲಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಯುವಕರು ಕುಣಿಯುತ್ತಾ ಹೆಜ್ಜೆಮೇಳವನ್ನು ಆಡುತ್ತಾ ಹಾಗೂ ಮಹಿಳೆಯರು ನಿಂಬೆ ಹಣ್ಣು ಕಬ್ಬು ಖಾರೀಖ ಬಾದಾಮಿ ಚೂರಮೂರಿಯನ್ನು ಆ ಡೋಲಿನ ಮೇಲೆ ಹಾರಿಸುತ್ತಾ ಗ್ರಾಮದ ಹೋರವಲಯದಲ್ಲಿ ಇರುವ ಊರ ಹಳ್ಳಕ್ಕೆ ಹೋಗುತ್ತಾರೆ.ಅಲ್ಲಿ ವರ್ಷದ ಮಳೆ ಬೆಳೆಯ ಬಗ್ಗೆ ಹೇಳಿಕೆಗಳನ್ನು ಆಗುತ್ತದೆ.

    ನಂತರ ಹಳ್ಳದ ದಡದಲ್ಲಿ ಡೋಲುಗಳಿಗೆ ಹಿಂದೂ -ಮುಸ್ಲಿಂ ಸಮುದಾಯದವರು ಸೇರಿ ಪೂಜೆ ಸಲ್ಲಿಸಿ.ಎಲ್ಲಾ ಗೋಲುಗಳನ್ನು ಮತ್ತೆ ಗ್ರಾಮದ ಮೂಲ ಮಸೀದಿಗಳಿಗೆ ಕರೆ ತರುತ್ತಾರೆ.ಇದು ಆದಿ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಗುರಪ್ಪ ಸಾತಲಿಂಗಪ್ಪ ಇಂಡಿಯವರು ಹೇಳಿದರು.ಈ ಬಾರಿ ಮೊಹರಂ ಹಬ್ಬದ ಶಾಂತಿಯುತವಾಗಿ ನುಡಿಯಲು ಹೋರ್ತಿ ಪೋಲಿಸ್ ಠಾಣೆ ಪಿಎಸ್ಐ ಅನೀತಾ ರಾಠೋಡ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.ಪೋಲಿಸ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

  • ಅಗ್ನಿವೀರ ಆಯ್ಕೆಯಾದ ಯೋಧರಿಗೆ ಸನ್ಮಾನ

    ಹಾಲುಮತ ಸಮಾಜದ ಅಧ್ಯಕ್ಷ ಜಟ್ಟೆಪ್ಪ ರವಳಿ ಅವರು ಗಡಿ ಕಾಯುವ ಅಗ್ನಿವೀರ ಹುದ್ದೆಗೆ ಆಯ್ಕೆಯಾದ ಯುವಕರಿಗೆ ನಿಂಗರಾಯ ದೇವಸ್ಥಾನದ ಆವರಣದಲ್ಲಿ ಸನ್ಮಾನಿಸಿ ಗೌರವಿಸಿದರು. ಇಂಡಿ ಗಡಿಯಲ್ಲಿ ನಮ್ಮ ಯೋಧರು ಹಗಲು-ರಾತ್ರಿಯನ್ನದೇ ರಕ್ಷಣೆ ಮಾಡುತ್ತಿರುವುದರಿಂದ ನಾವೆಲ್ಲ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ.

    ದೇಶ ಸೇವೆ ಮಾಡೋದು ಪವಿತ್ರವಾದ ಕಾರ್ಯ ಎಂದು ತಾಲೂಕಾ ಹಾಲುಮತ ಸಮಾಜದ ಅಧ್ಯಕ್ಷ ಜಟ್ಟೆಪ್ಪ ರವಳಿ ಹೇಳಿದರು. ಪಟ್ಟಣದ ನಿಂಗರಾಯ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ಗಡಿ ಕಾಯುವ ಅಗ್ನಿವೀರ ಹುದ್ದೆಗೆ ಆಯ್ಕೆಯಾದ ಯುವಕರಿಗೆ ಸನ್ಮಾನಿಸಿ ಮಾತನಾಡಿದರು.

    ಇಂದು ಯುವಕರು ದೇಶ ಪ್ರೇಮ ಬೆಳೆಸಿಕೊಂಡು ದೇಶ ಕಾಪಾಡುವದು ಯುವಕರ ಕೈಯಲ್ಲಿದೆ. ಯುವಕರು ದೇಶಕ್ಕಾಗಿ ಯಾವ ಪ್ರಾಣಕ್ಕೂ ಸಿದ್ದರಾಗಬೇಕೆಂದರು. ಪತ್ರಕರ್ತ ಲಕ್ಷ್ಮಣ ಕುರುಬರ ಮಾತನಾಡಿ ಒಬ್ಬ ರೈತ ಹಾಗೂ ಒಬ್ಬ ಸೈನಿಕ ಈ ದೇಶಕ್ಕೆ ದೊಡ್ಡ ಶಕ್ತಿ ಇವರಿಬ್ಬರ ನಿಸ್ವಾರ್ಥ ಸೇವೆಯಿಂದ ನಾವೆಲ್ಲ ಸಮೃದ್ಧಿ ಜೀವನ ನಡೆಸಲು ಸಾಧ್ಯವಾಗಿದೆ ತಾವುಗಳು ನಿಷ್ಠೆಯಿಂದ ದೇಶಕ್ಕಾಗಿ ದುಡಿಯಬೇಕು ಎಂದು ಯೋಧರಿಗೆ ಕರೆ ನೀಡಿದರು.ಲಕ್ಕು ಯಳಮೇಲಿ, ರೀಯಾಜ ಭಾಗವಾನ, ಬೀಮು ಪೂಜಾರಿ, ಹಣಮಂತ ಗುಡ್ಲ, ಪರಸುರಾಮ ಪೂಜಾರಿ, ಕೆಂಚಪ್ಪ ಬಂಗಾರಿ, ಸಿದ್ದಪ್ಪ ಬಂಗಾರಿ ಮತ್ತಿತರಿದ್ದರು.

  • ತಾಲೂಕು ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ ಪ್ರತಿಭಟನೆ

    ಇಂಡಿನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭೀಣಿಯರಿಗೆ ಸ್ತ್ರೀಯರ ವೈದ್ಯರಿಲ್ಲ ಎಂದು ಆಗ್ರಹಿಸಿ ಇಂದು ಅಯೂಬ ನಾಟಿಕಾರ ಇವರ ನೇತೃತ್ದಲ್ಲಿ ಜೆಡಿ ಎಸ್ ಕಾರ್ಯಕರ್ತರು ಆಡಳಿತಸೌಧ ಎದುರು ಪ್ರತಿಭಟನೆ ಮಾಡಿದರು.ಜೆಡಿ ಧುರೀಣ ಅಯೂಬ ನಾಟಿಕಾರ ಮಾತನಾಡಿ ಚಿಕಿತ್ಸೆಗಾಗಿ ಆಗಮಿಸುತ್ತಿರುವ

    ಬಡ ರೋಗಿಗಳಿಗೆ ಅಗತ್ಯವಾದ ಸ್ತ್ರೀ ರೋಗ ತಜ್ಞರಿಲ್ಲ.ಇದರಿಂದ ತಾಲೂಕಿನ ಗರ್ಭೀಣಿ ಸ್ತ್ರೀಯರಿಗೆ ಅತೀವ ತೊಂದರೆಯಾಗುತ್ತದೆ. ಅಲ್ಲಿಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಸೋಲಾಪುರಕ್ಕೆ ಹೋಗಿರಿ ಎಂದು ಹೇಳುತ್ತಾರೆ ಎಂದರು. ಈ ಕುರಿತು ತಾಲೂಕಾ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದರು.ಒಂದು ವೇಳೆ ಸಮಸ್ಯೆ ಬಗೆ ಹರಿಸದಿದ್ದರೆ ಜಿಲ್ಲಾ ವೈದ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವದೆಂದು ಎಚ್ಚರಿಕೆ ನೀಡಿದರು.

    ವಿಕಾಸ ಹೊಸಮನಿ, ಇರಫಾನ ಅಥಣಿಕರ ಸೇರಿದಂತೆ ಜೆಡಿ ಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು.ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಇವರಿಗೆ ಮನವಿ ಸಲ್ಲಿಸಿದರು.ಫೋಟೋ- ೨೫ ಇಂಡಿ ೦೩ಇಂಡಿಯ ಆಡಳಿತ ಸೌಧ ಎದುರು ಇಂಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞರು ಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಕಂದಾಯ ಉಪವಿಬಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

  • ಇಂಡಿ ಮತಕ್ಷೇತ್ರದ ಯಶವಂತರಾಯ ಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಲು ದಲಿತ ಸೇನೆ ಸಂಘಟನೆಯಿಂದ ಮನವಿ

    ಇಂಡಿ ಮತಕ್ಷೇತ್ರದ ಯಶವಂತರಾಯ ಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಲು ದಲಿತ ಸೇನೆ ಸಂಘಟನೆಯಿಂದ ಮನವಿ ವರದಿ. ಆನಂದ. ಅಗರಖೇಡ ಇಂಡಿ ದಲಿತ ಸೇನೆ ಸಂಘಟನೆ ವತಿಯಿಂದ ಡಿ ಕೆ ಶಿವುಕುಮಾರ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ರವರಗೆ ನಮ್ಮ ಇಂಡಿ ತಾಲೂಕಿಗೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಒಂದು ಬಾರಿಯು ಕೂಡಾ ಸಚಿವ ಸ್ಥಾನದ ಅವಕಾಶ ಸಿಕ್ಕಿರುವುದಿಲ್ಲ.. ಡಾ.ನಂಜುಡಪ್ಪ ವರದಿ ಪ್ರಕಾರ ನಮ್ಮ ತಾಲೂಕು ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಆರ್ಥಿಕವಾಗಿ, ಸಾಮಾಜಿಕ, ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ನಮ್ಮ ಮತಕ್ಷೇತ್ರ ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಬೇಕಾದರೇ ಈ ಬಾರಿ ನಮ್ಮ ಮತಕ್ಷೇತ್ರದ ಹೆಮ್ಮೆಯ ಜನನಾಯಕರು,

    ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳು, ದಿನ ದಲಿತರ, ಬಡವರ ಬಾಳಿಗೆ ಬೆಳಕಾದ ಧೀಮಂತ ನಾಯಕರು ಅಷ್ಟೇ ಅಲ್ಲದೇ ಇವರು ಕಾಂಗ್ರೇಸ್ ಪಕ್ಷವನ್ನು ನಮ್ಮ ತಾಲೂಕಿನಲ್ಲಿ ಬೇರು ಮಟ್ಟದಿಂದ ಸಂಘಟಿಸಿ ಜಿಲ್ಲೆಯಲ್ಲಿಯೇ ಒಂದು ದೊಡ್ಡ ಶಕ್ತಿಯನ್ನಾಗಿ ಮಾಡಿದ್ದಾರೆ.ಸತತ ಇವರು ಮೂರು ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಹ್ಯಾಟ್ರಿಕ ಸಾಧನೆ ಮಾಡಿರುವ ಜನಸೇವಕ ಇವರು ಕೇವಲ ಒಬ್ಬ ಶಾಸಕರಾಗಿ ನಮ್ಮ ಕ್ಷೇತ್ರದಲ್ಲಿ ಸತತ ಬರಗಾಲಿನಿಂದ ಕಂಗೆಟ್ಟ ನಮ್ಮ ತಾಲೂಕಿನಲ್ಲಿ ನೂರಾರು ಕೆರೆಗಳಿಗೆ ಬೇಸಿಗೆ ಸಮಯದಲ್ಲಿ ನೀರು ತುಂಬಿಸಿ, ಉತ್ತರ ಕರ್ನಾಟಕದ ಜೀವನಾಡಿಯಾದ ನಮ್ಮ ಭೀಮಾ ನದಿಗೆ ನೀರು ಹರಿಸಿ ರೈತರ ಬಾಳಿನಲ್ಲಿ ಬೆಳಕು ಮೂಡಿಸಿ,

    ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಂಬೆ ಬೆಳೆಗೆ “ಜಿಐ ಟ್ಯಾಗ್’ ಸಿಗುವಂತೆ ಮಾಡಿ ನಿಂಬೆ ಬೆಳೆ ಬೆಳೆಯುವ ರೈತರ ಬಾಳಿಗೆ ಬೆಳಕಾದ ನಿಂಬೆ ನಾಡಿನ ದೃವತಾರೆ..! ಇವರು ಇತ್ತಿಚಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳು ಮಾಡಿದ್ದಾರೆ. ಇಂತಹ ಜನಪರ ನಾಯಕನಿಗೆ ಈ ಬಾರಿ ತಾವು ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕೆಂದು ದಲಿತ ಸೇನೆ ಜಿಲ್ಲಾ ಅಧ್ಯಕ್ಷ ಖಾಜು. ಎಲ್. ಹೊಸಮನಿ ರವರು ತಾಲೂಕಿನ ತಹಸಿಲ್ದಾರ್ ಕಚೇರಿಯ ಚಿರಸ್ತೇದಾರ ಶ್ರೀಕಾಂತ ಪೂಜಾರಿ ಯವರಿಗೆ ಮನಿವಿ ಪತ್ರ ಸಲ್ಲಿಸಿ ಮಾತನಾಡಿದರು.

    ಇದೆ ಸಂದರ್ಭದಲ್ಲಿ ವಿನೋದ. ಬನಸೋಡೆ ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷರು ಇಂಡಿ ಭಾಗದ ಜನರ, ಮಹಿಳೆಯರ ವಿದ್ಯಾರ್ಥಿಗಳಸೇನೆ. ದಯವಿಟ್ಟು ಇಂತಹ ಬದ್ಧತೆಯ ನಾಯಕನಿಗೆ ಅನ್ಯಾವಾಗಲು ಹಾಗೂ ಬೀಡುವುದಿಲ್ಲವೆಂಬ ಆಶಾಭಾವ ನಮ್ಮದು.ಯಂದು ಹೇಳಿದರು

    ಮಾನ್ಯ ಮುಖ್ಯ ಮಂತ್ರಿಗಳು ನಮ್ಮ ಇಂಡಿ ಭಾಗಕ್ಕೆ ಸಚಿವ ಸ್ಥಾನ ನೆಡಲೇಬೇಕು ಇಲ್ಲ ವಾದಲ್ಲಿ ಮುಂದಿನ ದಿನಮಾನಗಳಲ್ಲಿ ದಲಿತ ಸೇನೆ ಸಂಘಟನೆಯಿಂದ ರಸ್ತೆ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ನಾಗರಾಜ್. ಲೋಣಿಕರ್, ಸತೀಶ್. ಬಿ. ಬನಸೋಡೆ, ರಾಮಚಂದ್ರ ಬಿ ಬನಸೋಡೆ, ರವಿ. ದೊಡ್ಡಮನಿ, ರಾಹುಲ್ ಗೌಳಿ, ಮಿಥುನ್ ಕೊರವಾರ ಉಪಸ್ಥಿತರಿದ್ದರು

  • ಮೊಹರಂ ; ಸ್ವಚ್ಛತೆ ಕುಡಿಯುವ ನೀರು ವ್ಯವಸ್ಥೆ ಎಸಿ ನಗರಾಯುಕ್ತರ ಭೇಟಿ

    ಇಂಡಿಯ ಹುಸೇನ ಬಾಷಾ ದರ್ಗಾಕ್ಕೆ ಮೊಹರಂ ನಿಮಿತ್ಯ ಎಸಿ ಚಿದಾನಂದ ಗುರುಸ್ವಾಮಿ ಭೇಟಿ ನೀಡಿ ಸ್ವಚ್ಚತೆ ಪರಿಶೀಲಿಸಿದರು.

    ಇಂಡಿನಗರದಲ್ಲಿ ಬುಧವಾರ ಜು ೨೪ ರಂದು ನಡೆಯಲಿರುವ ಮೊಹರಂ ಪ್ರಸಿದ್ದ ಆಟವಿ ಖತಾಲ ಮತ್ತು ಗುರುವಾರ ೨೫ ರಂದು ನಡೆಯುವ ದೇವರ ಮೆರವಣೆಗೆ ಕುರಿತು ಇಂದು ಹುಸೇನ ಬಾಷಾ ದೇವಸ್ಥಾನಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಮೂರ್ತಿ ಮತ್ತು ವಿವಿಧ ಅಧಿಕಾರಿಗಳು ಭೇಟಿ ನೀಡಿ ಕುಡಿಯುವ ನೀರು ಮತ್ತು ಸ್ವಚ್ಚತೆ ವಿದ್ಯುತ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.ದೇವಸ್ಥಾನದ ಸುತ್ತ ಮುತ್ತ ಈಗಾಗಲೇ ನಗರಸಭೆಯಿಂದ ಸ್ವಚ್ಚತಾ ಕಾರ್ಯ ಮಾಡುತ್ತಿದ್ದು ಪ್ರತಿದಿನ ಎರಡು ಬಾರಿ ಸ್ವಚ್ಚತಾ ಸಿಬ್ಬಂದಿ ಸ್ವಚ್ಚತಾ ಕಾರ್ಯ ಮಾಡುತ್ತಿದೆ ಎಂದರು.ಅದಲ್ಲದೆ ಬುಧವಾರ ೨೪ ರಂದು ಅಂದಾಜು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ನಗರಕ್ಕೆ ಹೊರಗಿನಿಂದ ಬರುವ ನಿರೀಕ್ಷೆ ಇದ್ದು ಅವರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಟ್ಯಾಂಕರ ವ್ಯವಸ್ಥೆ ಮಾಡಲಾಗಿದೆ. ಮತ್ತು ಅಲ್ಲಿನ ನಿವಾಸಿಗಳ ಮನೆಯ ನಳ ೨೪ ಗಂಟೆ ಇರುವದು. ಅವರು ಸಹಕರಿಸಲು ನಿವಾಸಿಗಳಿಗೆ ವಿನಂತಿಸಿದರು.ವಿದ್ಯುತ್ ಇಲಾಖೆಯವರಿಗೆ ವಿದ್ಯುತ್ ತೊಂದರೆಯಾಗದಂತೆ ಮತ್ತು ದೇವಸ್ಥಾನದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ವ್ಯವಸ್ಥೆ ಇದ್ದು ಪೋಲಿಸ ಇಲಾಖೆ ಎರಡು ತುಕುಡಿಗಳು ದೇವಸ್ಥಾನದ ಸುತ್ತಲೂ ಶಾಂತಿ ಮತ್ತು ಸುವ್ಯವಸ್ಥೆಗೆ ಇರುವರು ಎಂದರು.ನಗರಸಭೆ ಆಯುಕ್ತ ಶಿವಾನಂದ ಪೂಜಾರಿ, ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಸಿ.ಪಿ.ಐ ಪ್ರದೀಪ ಬಿಸೆ, ನಗರಸಭೆಯ ಸಂಗೀತಾ ಕೋಳಿ, ಹುಚ್ಚಪ್ಪ ಶಿವಶರಣ ಮತ್ತು ದೇವಸ್ಥಾನದ ಸಮಿತಿಯ ಸದಸ್ಯರು ಇದ್ದರು.

  • ಸೂಕ್ತ ಪ್ರತಿಭೆಯನ್ನು ಹೊರ ಹಾಕುವದೇ ಶಿಕ್ಷಣ – ಸ್ವರೂಪಾನಂದ ಶ್ರೀಗಳು

    ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಪ್ರಸಕ್ತ ವರ್ಷದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು. 

     ಇಂಡಿ

    ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ಹಾಕುವದೇ ಶಿಕ್ಷಣ, ಸೂಕ್ತ ಪ್ರತಿಭೆಯನ್ನು ಹಾಕಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ದೊರಕಿಸಿಕೊಟ್ಟಾಗ ಮಾತ್ರ ಸಾಧ್ಯ ಎಂದು ಇಂಡಿ ನಗರದ ಓಂ ಕಾರ ಆಶ್ರಮದ ಶ್ರೀ ಸಿದ್ದಾರೂಢ ಮಠದ ಡಾ. ಸ್ವರೂಪಾನಂದ ಶ್ರೀಗಳು ಹೇಳಿದರು.

    ತಾಲೂಕಿನ ಹಿರೇಬೇವನೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೂಗಾರ ವಸ್ತಿ ಶಾಲೆ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಮ್ಮಿಕೊಂಡ ಪ್ರಸಕ್ತ ವರ್ಷದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

    ನಿವೃತ್ತ ಶಿಕ್ಷಕರಾದ ಆರ್.ವಿ.ಪಾಟೀಲ,ಎಸ್.ಜಿ. ಬಿರಾದಾರ,ಹಾಗೂ ಕೆ.ಜಿ.ನಾಟಿಕಾರ ಶಿಕ್ಷಕರು ತಮ್ಮ ಸೇವಾ ಅನುಭವವನ್ನು ಹಂಚಿಕೊಳ್ಳುತ್ತಾ ಹಿರೇಬೇವನೂರ ಗ್ರಾಮದ ಸರಕಾರಿ ಶಾಲೆಯಲ್ಲಿ ಈ ಹಿಂದೆ ಕಲಿತು ಉದ್ಯೋಗ ಮಾಡುತ್ತಿರುವ ಹಾಗೂ ನಿವೃತ್ತ ನೌಕರರನ್ನು ಒಂದು ಗೂಡಿಸಿ ಸಂಘ ರಚಿಸಿ ಶಾಲಾಭಿವೃದ್ದಿ ಸಲುವಾಗಿ ಶ್ರಮಿಸುವದು ಶ್ರೇಷ್ಠಕಾರ್ಯ ಎಂದರು.

    ವಸತಿಯ ಹಿರಿಯರಾದ ಗುರಣ್ಣ ಪವಾಡಿ, ಬಿ.ಎಸ್.ಬಿರಾದಾರ ಗಿರಿಮಲ್ಲ ಬಿರಾದಾರ ಉದ್ಘಾಟಿಸಿದರು.ಬಿ.ಎಂ.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

    ಮುಖ್ಯ ಗುರುಗಳಾಗಿ ಹಾಗೂ ಗೃಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಸ್.ಜಿ. ಬಿರಾದಾರ, ಆರ್.ವಿ.ಪಾಟೀಲ, ಕೆ.ಜಿ.ನಾಟಿಕಾರ, ಎ.ಎಲ್ ಬೇನೂರ, ಬಸಮ್ಮ ಭಾಸಗಿ, ಗಿರಿಜಾ ಮಲಘಾಣ, ಬೆಬಿ ಶೇಖ್ ಇವರನ್ನು ಸನ್ಮಾನಿಸಲಾಯಿತು.

    ಸಾತಪ್ಪ ಪವಾಡಿ, ಗಿರಿಗೌಡ ಬಿರಾದಾರ, ಸೋಮು ಪಾತಾಳಿ, ರಾಜು ಪಾತಾಳಿ, ವಿ.ಬಿ.ನರಳಿ, ಮುಖ್ಯ ಗುರು ಯು ಎಚ್ ಚವ್ಹಾಣ ಪಿ.ಜಿ.ರಾಠೋಡ, ಜೆ.ಎಸ್.ಧನಗೊಂಡ ಭಜಂತ್ರಿ, ಎಸ್.ಎಸ್. ಅಂದೆವಾಡಿ ಮತ್ತಿತರಿದ್ದರು.

  • ಇಂಡಿ | ಆತ್ಮ ಹಿರೇಮಠ ಕೇಂದ್ರ ಸರ್ಕಾರದ ನ್ಯಾಯವಾದಿಯಾಗಿ ನೇಮಕ..!

    ಇಂಡಿ | ಆತ್ಮ ಹಿರೇಮಠ ಕೇಂದ್ರ ಸರ್ಕಾರದ ನ್ಯಾಯವಾದಿಯಾಗಿ ನೇಮಕ..! ಇಂಡಿ : ಬೆಂಗಳೂರಿನ ಉಚ್ಛ ನ್ಯಾಯಾಲಯದಲ್ಲಿ (High Court) 15 ವರ್ಷಗಳಿಂದ ವಕೀಲ ವೃತ್ತಿ ಸಲ್ಲಿಸುತ್ತಿರುವ ಯುವ ವಕೀಲರಾದ  ಆತ್ಮ ವಿ. ಹಿರೇಮಠ ಅವರಿಗೆ ಸಿಕ್ಕಿರುವ ಅತ್ಯಂತ ಜವಾಬ್ದಾರಿಯುತ ಹುದ್ದೆ ಇದಾಗಿದೆ.ಕಳೆದ 8 ವರ್ಷಗಳಿಂದ ಕೇಂದ್ರ ಸರ್ಕಾರದ ವಕೀಲರಾಗಿ ಸುದೀರ್ಘ ಹಾಗೂ ದಕ್ಷ ಸೇವೆಯನ್ನು ಪರಿಗಣಿಸಿ, ಕೇಂದ್ರ ಸರ್ಕಾರವು ಅವರನ್ನು ಕೇಂದ್ರ ಸರ್ಕಾರದ ವಕೀಲರನ್ನಾಗಿ (Central Government Counsel) 3 ವರ್ಷಗಳ ಅವಧಿಗೆ ನೇಮಕ ಮಾಡಿ ಆದೇಶ ಹೊರಡಿಸಿರುವುದು ಅವರ ವೃತ್ತಿಪರತೆಗೆ ಸಂದ ಗೌರವವಾಗಿದೆ.ಈ ನೇಮಕಾತಿಯ ಮೂಲಕ ಅವರು ಮುಂದಿನ 3 ವರ್ಷದ ಅವಧಿಗೆ ಉಚ್ಛ ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಪ್ರಮುಖ ಕಾನೂನು ಪ್ರಕ್ರಿಯೆಗಳನ್ನು ಹಾಗೂ ಪ್ರಕರಣಗಳನ್ನು ನಿರ್ವಹಿಸಲಿದ್ದಾರೆ. ಶ್ರೀಯುತ ಆತ್ಮ ವಿ. ಹಿರೇಮಠ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರಶ್ಯಾಡ ಗ್ರಾಮದವರು ಆಗಿದ್ದಾರೆ ಅವರಿಗೆ ಶ್ರೀ ಎಂ. ಎಸ್. ಮಠ ಅಧ್ಯಕ್ಷರು ಶ್ರೀ ಗುರು ಗಂಗಾಧರೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನೀ. ಶಿರಶ್ಯಾಡ ಇವರಿಂದ ಅಭಿನಂದನೆಗಳು.ತಿಳಿಸಿರುತ್ತಾರೆ